ಬಸ್ ಸಿಬ್ಬಂದಿಗಳ ನಿರ್ಲಕ್ಷಕ್ಕೆ ಕರುಳ ಕುಡಿ ಬಲಿ, ಕಣ್ಣೀರು ತರಿಸುತ್ತಿದ್ದೆ ಹೆತ್ತಬ್ಬೆಯ ಶೋಕ ಪತ್ರ

ಕುಂದಾಪುರ – ಬೆಂಗಳೂರಿನಿಂದ ಕುಂದಾಪುರಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಪ್ರಯಾಣಿಸುತ್ತಿದ್ದ ಬಸ್ ನಲ್ಲಿ ಮೃತಪಟ್ಟ ಕುಂದಾಪುರ ಮೂಲದ ಯುವಕ ಸುಹಾಸ್ ಎಸ್. ಮಯ್ಯ (22) ರ ತಾಯಿ ಜಿಲ್ಲಾಧಿಕಾರಿಯವರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಸುಹಾಸ್ ತಾಯಿ ಬರೆದ ಪತ್ರಕ್ಕೆ ಜಿಲ್ಲಾಧಿಕಾರಿ ಜಗದೀಶ್ ರವರು ಉಡುಪಿ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿದ್ದು
“ಈಗಾಗಲೇ ಎಸ್ಪಿಯವರಿಗೆ ಮಾತನಾಡಿದ್ದೇನೆ ಸುಮಾ ಅವರ ಜೊತೆಗೂ ಸಹ ಮಾತನಾಡಿದ್ದೇನೆ ಸುಮಾ ಅವರು ಒಂದು ಲಿಖಿತ ದೂರನ್ನು ಎಸ್ಪಿಯವರಿಗೆ ನೀಡಿದ್ದಲ್ಲಿ ತಕ್ಷಣ ತನಿಖೆ ನಡೆಸಲಾಗುವುದು” ಎಂದರು


ದುರ್ಗಂಬಾ ಎಂಬ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತನಗೆ ಎದೆ ನೋವು ಕಾಡುತ್ತಿದ್ದೆ ಎಂದರು ಬಸ್ ನ್ನು ನಿಲ್ಲಿಸದೆ ಬಸ್ ಸಿಬ್ಬಂದಿಗಳ ನಿರ್ಲಕ್ಷಕ್ಕೆ ತನ್ನ ಮಗನ ಪ್ರಾಣಪಕ್ಷಿಯೇ ಹಾರಿ ಹೋಯಿತು,, ಇಂತಹ ತಪ್ಪು ಇನ್ನೊಮ್ಮೆ ಆಗಬಾರದು ಇಂತಹ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಸುಹಾಸ್ ರವರ ತಾಯಿ ಸುಮಾ ರವರು ಜಿಲ್ಲಾಧಿಕಾರಿಗಳಿಗೆ ಪತ್ರ ದಲ್ಲಿ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಸುಮಾ ಅವರು ಒಂದು ಲಿಖಿತ ದೂರನ್ನು ಎಸ್ಪಿಯವರಿಗೆ ನೀಡಿದ್ದಲ್ಲಿ ತಕ್ಷಣ ತನಿಖೆ ನಡೆಸಲಾಗುವುದು ಎಂದಿದ್ದಾರೆ

Leave a Reply

Your email address will not be published. Required fields are marked *

error: Content is protected !!