ಮುಖ್ಯ ಮಂತ್ರಿಗಳೇ ನನಗೆ ನ್ಯಾಯ ಕೊಡಿಸಿ: ಆಡಿಯೋದಲ್ಲಿ ವಿ.ಕೆ. ಮೋಹನ್ ಕೊನೆಯ ಮಾತು

ಉಡುಪಿ (ಉಡುಪಿ ಟೈಮ್ಸ್ ವರದಿ)- ಉದ್ಯಮಿ ನಿರ್ಮಾಪಕ ವಿ ಕೆ ಮೋಹನ್ ಆತ್ಮಹತ್ಯೆಗೈದುಕೊಳ್ಳುವ ಮೊದಲು ಖಾಸಗಿ ಟಿ ವಿ ಚಾನೆಲ್ ಉದ್ದೇಶಿಸಿ ತಮ್ಮ ಕೊನೆಯ ಮಾತುಗಳನ್ನಾಡಿದ್ದ ಆಡಿಯೋ ಸಿಕ್ಕಿದ್ದು, ಇದರಲ್ಲಿ ಅವರು “ತಮ್ಮ ಪೀಣ್ಯ ಬಸ್ ನಿಲ್ದಾಣದ ಟೆಂಡರ್ ರನ್ನು ಒಬ್ಬರೇ ಅತಿ ಹೆಚ್ಚಿನ ಬಿಡ್ಡಿಂಗ್ ನಲ್ಲಿ ಪಡೆದಿದ್ದಾರೆ. ಆದರೆ ಆ ಟೆಂಡರ್ ನಿಂದ ತನಗೆ ಅನ್ಯಾಯ ಆಗಿದೆ.

ಇದರಿಂದ ಸುಮಾರು 7 ವರ್ಷಗಳಿಂದ ತನಗೆ ನ್ಯಾಯ ಸಿಕ್ಕಿಲ್ಲ, ಈ ಹೋರಾಟದಲ್ಲಿ ತನ್ನ ಮನೆ ಕಳೆದುಕೊಂಡಿದ್ದೇನೆ ಹಾಗಾಗಿ ಮುಖ್ಯಮಂತ್ರಿಗಳು ಹಾಗು ಲಕ್ಷ್ಮಣ ಸವದಿಯವರು ಇದಕ್ಕೆ ನ್ಯಾಯ ಕೊಡಿಸಬೇಕು. ಈಗ 8 ತಿಂಗಳಿಂದ ತಾನು ಬಾಡಿಗೆ ಕಟ್ಟಿಲ್ಲ ಇದೀಗ ಇಲಾಖೆ ತನ್ನ ಹೋಟೆಲ್ ನ್ನು ಸೀಜ್ ಮಾಡುವುದಾಗಿ ತಿಳಿಸಿದೆ ಹಾಗಾಗಿ ತನಗೆ ನ್ಯಾಯ ಕೊಡಿಸಿ”. ಎಂಬುದಾಗಿ ಆಗ್ರಹಿಸಿದ ಆಡಿಯೋ ಇದೀಗ ವಾಟ್ಸಪ್ ಗ್ರೂಪ್ ಗಳಲ್ಲಿ ಶೇರ್ ಆಗುತ್ತಿದ್ದೆ.

Leave a Reply

Your email address will not be published. Required fields are marked *

error: Content is protected !!