ಕೋಟ : ಬ್ಯಾಂಕ್ ಪಾಸ್ ಬುಕ್ ನೀಡದಕ್ಕೆ ಪತಿ ನೇಣು ಬೀಗಿದು ಆತ್ಮಹತ್ಯೆ

ಕೋಟ: ಪತ್ನಿಯು ಬ್ಯಾಂಕ್ ಪಾಸ್ ಬುಕ್ ನೀಡದಕ್ಕೆ ಪತಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ಸಂಜೆ ಕೋಟ ಬಿಲ್ಲಾಡಿಯಲ್ಲಿ ನಡೆದಿದೆ.

ಇಲ್ಲಿನ ಜಾನುವಾರಕಟ್ಟೆ ಪಿಂಡಾರಿಅಡಿ ಮನೆಯ ಕೃಷ್ಣ ನಾಯ್ಕ ಹವ್ಯಾಸಿ ಯಕ್ಷಗಾನ ಕಲಾವಿದನಾಗಿದ್ದು ಕುಡಿತದ ಚಟ ಹೊಂದಿದ್ದ,ಪತ್ನಿ ಜ್ಯೋತಿ ಗೇರು ಬೀಜ ಕಾರ್ಖಾನೆಯಲ್ಲಿ ಕೆಲಸ ಮಾಡಿ  ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಳು,  ಗಂಡ ಕೃಷ್ಣ ನಾಯ್ಕ (35)  ಪ್ರತಿ ನಿತ್ಯ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ.

ನಿನ್ನೆ ಸಂಜೆ  ಮನೆಗೆ ಬಂದಾಗ ತನಗೆ ಹಣ ಬೇಕು ಬ್ಯಾಂಕಿನ ಪಾಸಬುಕ್ ಕೊಡು ಎಂದಾಗ ತನ್ನ ಬಳಿ ಹಣ ಇಲ್ಲವೆಂದು ಹೇಳಿದ್ದಳು.ಇದರಿಂದ ಕೋಪಗೊಂಡು ಪತ್ನಿಗೆ   ಹೊಡೆಯಲು ಬಂದಾಗ ಜ್ಯೋತಿ ತನ್ನ ಮಕ್ಕಳನ್ನು ಕರೆದುಕೊಂಡು  ಅಡುಗೆ ಮನೆಯಲ್ಲಿ ಅವಿತಿದ್ದಳು. ಅರ್ಧ ಗಂಟೆ ನಂತರ ಬಂದು ನೋಡಿದಾಗ  ಗಂಡ ಮನೆಯ ಬೆಡ್ ರೂಂನಲ್ಲಿ ಕುತ್ತಿಗೆಗೆ ಚೂಡಿದಾರದ ಶಾಲನ್ನು  ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.  ಕೂಡಲೇ ಚೂಡಿದಾರದ ಶಾಲನ್ನು ಕತ್ತಿಯಿಂದ ತುಂಡು ಮಾಡಿ ಕೆಳಗೆ ಇಳಿಸಿದಾಗ‌ ಪತಿ ಆದಾಗಲೇ   ಮೃತಪಟ್ಟಿದ್ದ.
ಈ ಬಗ್ಗೆ  ಕೋಟ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣದ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!