ಹೆಬ್ರಿ: ಸೀತಾನದಿಯಲ್ಲಿ ಮುಳುಗಿ ಯುವಕ ಸಾವು

ಹೆಬ್ರಿ: ಸೀತಾನದಿಯ ಹೊಳೆಯಲ್ಲಿ ಈಜಲು ಹೋಗಿ ಸ್ಥಳೀಯ ಯುವಕನೊರ್ವ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಚಾರ ಕಲ್ಲಿಲ್ಲು ಬಹು ಗ್ರಾಮ ನೀರಾವರಿ ಡ್ಯಾಮ್ ನಲ್ಲಿ ಈಜಲು ತನ್ನ ಬಾವನೊಂದಿಗೆ ತೆರಳಿದ್ದ ಸ್ಥಳೀಯ ಸಂತೋಷ್(20) ಮೃತ ಪಟ್ಟ ದುರ್ದೈವಿ.

ಹೆಬ್ರಿಯ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದ ಸಂತೋಷ್ ಡ್ಯಾಮ್ ಬಳಿ ಈಜುತ್ತಿರುವಾಗ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದ.ದಡದಲ್ಲಿ ಕೂತಿದ್ದ ಬಾವ ನೋಡುತ್ತಿದ್ದಂತೆ ಸಂತೋಷ್ ನೀರಿನಲ್ಲಿ ಕೊಚ್ಚಿ ಹೋಗಿದ್ದು, ತಕ್ಷಣ ಸ್ಥಳೀಯರನ್ನು ಕರೆದು ರಕ್ಷಿಸಲು ಪ್ರಯತ್ನ ಪಟ್ಟರು ಸಂತೋಷ್ ನನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಹೆಬ್ರಿ ಪೊಲೀಸರು ತಿಳಿಸಿದ್ದಾರೆ.

ಹೆಬ್ರಿ ಪೊಲೀಸರು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತಪಟ್ಟ ಯುವಕನ ಮೃತದೇಹಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ರವಿವಾರ ಸೀತಾ ನದಿ ಜೋಮ್ಲು ಫಾಲ್ಸ್ ನಲ್ಲಿ ಬ್ರಹ್ಮಾವರದ ಯುವಕ ಮೃತಪಟ್ಟಿದ್ದ.

Leave a Reply

Your email address will not be published. Required fields are marked *

error: Content is protected !!