ನರೇಂದ್ರ ಮೋದಿಯವರಿಗೆ ವೋಟ್‌ ಹಾಕ್ತೀರಿ…ಸಮಸ್ಯೆ ನಾನು ಬಗೆಹರಿಸಬೇಕಾ?ಸಿಂ. ಎಚ್ಡಿಕೆ

ರಾಯಚೂರು: ‘ನರೇಂದ್ರ ಮೋದಿಯವರಿಗೆ ವೋಟ್‌ ಹಾಕ್ತೀರಿ…ಸಮಸ್ಯೆ ನಾನು ಬಗೆಹರಿಸಬೇಕಾ?ಸಿಂ. ಎಚ್ಡಿಕೆ ಹೀಗೆ ಆಕ್ರೋಶ ವ್ಯಕ್ತಪಡಿಸಿದವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕಾಗಿ ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕರೇಗುಡ್ಡಕ್ಕೆ ಬಸ್‌ನಲ್ಲಿ ಬುಧವಾರ ತೆರಳುತ್ತಿದ್ದಾಗ  ವೈಟಿಪಿಎಸ್ ಕಾರ್ಮಿಕರ ಸಂಘದ ಸದಸ್ಯರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಸಿಟ್ಟಿಗಾದರು. 

‘ನಿಮ್ಮ ಮನವಿಪತ್ರ ಸ್ವೀಕರಿಸಿದ್ದೇನೆ. ನಿಮಗೆ ಮರ್ಯಾದೆ ಕೊಡಬೇಕಾ? ಇಲ್ಲ ಲಾಠಿ ಚಾರ್ಜು ಮಾಡಿಸಬೇಕಾ’ ಎಂದು ಪ್ರಶ್ನಿಸಿದರು. ಇದರಿಂದ ಸ್ಥಳದಲ್ಲಿ ಕೆಲ ಹೊತ್ತು ಗೊಂದಲಮಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಖ್ಯಮಂತ್ರಿಯ ಈ‌ ನಡವಳಿಕೆಗೆ‌ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

error: Content is protected !!