ಕಾರು ಮತ್ತು ಬುಲೆಟ್ ಟ್ಯಾಂಕರ್ ಮುಖಾ-ಮುಖಿ : ನಾಲ್ವರು ಸ್ಥಳದಲ್ಲಿಯೇ ಸಾವು

ಬಂಟ್ವಾಳ: ರಾ.ಹೆ.75 ರ ಬ್ರಹ್ಮರಕೊಟ್ಲು ಬಳಿ ಶುಕ್ರವಾರ ಮಧ್ಯಾಹ್ನ ನಡೆದ ಬೀಕರ ಅಪಘಾತದಲ್ಲಿ ಭಟ್ಕಳ ಮೂಲದ ನಾಲ್ವರು ಮೃತಪಟ್ಟಿದ್ದು,ಹಲವರು ಗಾಯಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಠಾಣಾ ವ್ಯಾಪ್ತಿಯ ಬ್ರಹ್ಮರಕೂಟ್ಲು ಎಂಬಲ್ಲಿ ಧರ್ಮಸ್ಥಳದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎ 53 ಎ 6527 ನಂಬರಿನ ಟವೇರಾ ಕಾರು ಮತ್ತು ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಎ 01 ಎಜೆ 6898 ನಂಬರಿನ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಭಟ್ಕಳ ಮೂಲದ ಒಂದೇ ಕುಟುಂಬದ 11 ಜನರ ಪೈಕಿ ಗೋವಿಂದ, ಪದ್ಮಾವತಿ,ನಾಗರಾಜ ಮತ್ತು ಗಣೇಶ ಎಂಬವರುಗಳು ಮೃತ ಪಟ್ಟಿದ್ದಾರೆ, ಉಳಿದ ಗಾಯಾಳುಗಳನ್ನು ಚಿಕಿತ್ಸೆಗಾಗಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.

ಗಾಯಾಳುಗಳ ವಿವರ ತಕ್ಷಣಕ್ಕೆ ಲಭ್ಯವಾಗಿಲ್ಲ.ಈ ಘಟನೆಯಿಂದ ರಾ.ಹೆ.ಯಲ್ಲಿ ಕೆಲಹೊತ್ತುಗಳ ಕಾಲ ಸಂಚಾರ ಅಸ್ತವ್ಯಸ್ತ ಗೊಂಡಿತು .ಸುದ್ದಿ ತಿಳಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ಕ್ರಮ ಕೈಗೊಂಡರು.

Leave a Reply

Your email address will not be published. Required fields are marked *

error: Content is protected !!