ಕಾರ್ಕಳ: ಆಂಟಿ ಮದುವೆಗೆ ಒತ್ತಾಯಿಸಿದ ಯುವಕನ ಸಂಶಯಾಸ್ಪದ ಸಾವು

ಕಾರ್ಕಳ: ಎರಡು ಮಕ್ಕಳ ತಾಯಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಪ್ರಿಯಾಕರನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಾರ್ಕಳ ಮಾಳ ಗ್ರಾಮದ ಅವಿವಾಹಿತ ಹರೀಶ್ (35) ಗುರುವಾರ ಬೆಳಿಗ್ಗೆ 9 ಗಂಟೆಗೆ ಮನೆಯಿಂದ ಕೂಲಿ ಕೆಲಸಕ್ಕೆಂದು ಹೋಗಿದ್ದು ರಾತ್ರಿ ವಾಪಸು ಮನೆಗೆ ಬಾರದಿರುವುದನ್ನು ಕಂಡು ಸಂಶಯಗೊಂಡು ಯುವಕನ ತಂದೆ ಅಣ್ಣಪ್ಪ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಹರೀಶ್‌ಗೆ ಕಲ್ಯಾ ಗ್ರಾಮದ ಕುಂಟಾಡಿಯ ಪಟ್ಲ ವಿವಾಹಿತೆ ಮಹಿಳೆಯೊಂದಿಗೆ ಸ್ನೇಹವಿದ್ದು ಆಗಾಗ್ಗೆ ಆಕೆಯ ಮನೆಗೆ ಬಂದು ಹೋಗುತ್ತಿದ್ದ. ಈ ವಿಷಯ ಮಹಿಳೆಯ ತಮ್ಮ ರವಿಗೆ ಮಾಹಿತಿ ತಿಳಿದು ಹರೀಶ್‌ಗೆ ಎಚ್ಚರಿಕೆ ನೀಡಿದ್ದರು.


ಸ್ಥಳೀಯರ ಮಾಹಿತಿಯಂತೆ ಹರೀಶ್ ವಿವಾಹಿತ ಮಹಿಳೆಯನ್ನು ಮದುವೆ ಆಗಲು ಒತ್ತಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.
ಇದನ್ನು ನಿರಾಕರಿಸಿದಕ್ಕೆ ನೊಂದು ಮಹಿಳೆಯ ಮನೆ ಬಳಿಯ ಪಟ್ಲ ಹೊಳೆ ಬದಿಯಲ್ಲಿ ಮರಕ್ಕೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ತನ್ನ ಮಗನ ಮರಣದಲ್ಲಿ ಸಂಶಯ ಇದೆಂದು ಯುವಕನ ತಂದೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!