ಉಡುಪಿ ಮದ್ಯ ಸಿಗದಿದ್ದಕ್ಕೆ ಮೀನುಗಾರ ನೇಣಿಗೆ, ಏಳಕ್ಕೇರಿದ ಕುಡುಕರ ಆತ್ಮಹತ್ಯೆ

ಉಡುಪಿ: ದೇಶದೆಲ್ಲೆಡೆ ಜನರು ಅಗತ್ಯ ವಸ್ತುಗಳ ಖರೀದಿಗೆ ಹರಸಾಹಸ ಪರದಾಡುತ್ತಿದ್ದರೆ, ಇನ್ನೊಂದೆಡೆ ಮದ್ಯವ್ಯಸನಿಗಳ ಆತ್ಮಹತ್ಯೆಗಳ ಸರಮಾಲೆ ಜಿಲ್ಲೆಯಲ್ಲಿ ಮುಂದುವರಿದಿದೆ. ಕಳೆದ ಒಂದು ವಾರದಿಂದ ಮದ್ಯ ಮಾರಾಟ ಬಂದ್ ಆಗಿರುವುದರಿಂದ ವ್ಯಸನಿಗಳು ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.


ಶಿರ್ವ ಠಾಣಾ ವ್ಯಾಪ್ತಿಯ ಸುಭಾಸ್ ನಗರದ ಮೀನುಗಾರ ಪಾಂಡು ಪೂಜಾರಿ (68) ಮದ್ಯ ಸಿಗದೆ ಮಂಗಳವಾರ ಮುಂಜಾನೆ ಮನೆ ಬಳಿಯ ಹಾಡಿಯ ಗೇರು ಮರಕ್ಕೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಇವರು ಇತ್ತೀಚೆಗೆ ಎಲ್ಲಿಯೂ ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೊಳಗಾಗಿದ್ದರು.
ವಾರದಿಂದ ಲಾಕ್ ಡೌನ್ ನಿಂದ ಬಾರ್ ಗಳಲ್ಲಿ ಮದ್ಯ ಸಿಗದಿದ್ದಕ್ಕೆ ಮನನೊಂದು ಇವರೆಗೆ ಜಿಲ್ಲೆಯಲ್ಲಿ ಏಳು ಜನ ಕುಡುಕರು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.

Leave a Reply

Your email address will not be published. Required fields are marked *

error: Content is protected !!