ಕಂಪ್ರೆಷರ್ ಸ್ಪೋಟಗೊಂಡು ಪುಂಜಾಲಕಟ್ಟೆಯ ಯುವಕ ಕತಾರ್ ನಲ್ಲಿ ಸಾವು

ಬಂಟ್ವಾಳ: ಕತಾರ್ ನಲ್ಲಿ ಕಂಪ್ರೆಶರ್ ಸ್ಪೋಟಗೊಂಡ ಪರಿಣಾಮ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.ಮಾಲಾಡಿ ಗ್ರಾಮದ ಪುಂಜಾಲಕಟ್ಟೆಯ ಸಮೀಪದ ಪುರಿಯ ನಿವಾಸಿ ಸಂದೇಶ್ ಶೆಟ್ಟಿ (30) ಮೃತಪಟ್ಟವರೆಂದು ಗುರುತಿಸಲಾಗಿದೆ .

ಮೃತ ಸಂದೇಶ್ ಕತಾರ್ ನಲ್ಲಿ  ಟಾಕಿಫ್ ಇಲೆಕ್ಟ್ರೋ ಮೆಕ್ಯಾನಿಕಲ್ ಸಂಸ್ಥೆಯಲ್ಲಿ ಎಸಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು ಎಂದು ತಿಳಿದುಬಂದಿದೆ. ಸಂದೇಶ್ ಕತಾರ್ ಸ್ಟೇಡಿಯಂನಲ್ಲಿ ಜುಲೈ 23ರಂದು ಕೆಲಸ ನಿರ್ವಹಿಸುತ್ತಿರುವಾಗ ಕಂಪ್ರೆಶರ್ ಸ್ಪೋಟಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಸಂದೇಶ್ 20 ದಿನಗಳ ಹಿಂದೆಯಷ್ಟೇ ತನ್ನ ಪತ್ನಿಯನ್ನು ಕತ್ತಾರ್ ಗೆ ಕರೆಯಿಸಿಕೊಂಡಿದ್ದರು. ಜು.14 ರಂದು ತನ್ನ ಹುಟ್ಟುಹಬ್ಬನ್ನು ಕೂಡ ಆಚರಿಸಿಕೊಂಡಿದ್ದರೆನ್ನಲಾಗಿದೆ.

1 thought on “ಕಂಪ್ರೆಷರ್ ಸ್ಪೋಟಗೊಂಡು ಪುಂಜಾಲಕಟ್ಟೆಯ ಯುವಕ ಕತಾರ್ ನಲ್ಲಿ ಸಾವು

Leave a Reply to Steven Cancel reply

Your email address will not be published. Required fields are marked *

error: Content is protected !!