ಮಂಗಳೂರು: ವೆನ್‌ಲಾಕ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರಾಜೇಶ್ವರಿ ವರ್ಗಾವಣೆ

ಮಂಗಳೂರು: (ಉಡುಪಿ ಟೈಮ್ಸ್ ವರದಿ ) ಇತ್ತೀಚಿಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಬಗ್ಗೆ ವೈರಲ್ ಅದ ಆಡಿಯೋ ವಿಚಾರವಾಗಿ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಯವರನ್ನು ವರ್ಗಾವಣೆ ಮಾಡಲಾಗಿದೆ . ಕೊರೊನ ವಾರ್ಡ್ ಬಗ್ಗೆ ನರ್ಸ್ ಒಬ್ಬರು ಮಾತನಾಡಿದ ಆಡಿಯೋ ಇತ್ತೀಚಿಗೆ ಸಕತ್ ವೈರಲ್ ಆಗಿದ್ದು ಸಾರ್ವಜನಿಕರ ಅಂತಕಕ್ಕೆ ಕಾರಣವಾಗಿತ್ತು.

ಇದರ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಾವು ಈ ಕುರಿತಾಗಿ ಕ್ರಮ ಕೈಗೊಂಡಿದ್ದು ಹಿರಿಯ ಅನುಭವಿ ವೈದ್ಯಾ ಧಿಕಾರಿಯೋರ್ವರನ್ನು ಡಿಎಚ್ಓ ನ್ನಾಗಿ ನಿಯುಕ್ತಿಗೊಳಿಸಲಾಗಿದೆ ಎಂಬುದಾಗಿ ಟ್ವಿಟ್ ಮಾಡಿದ್ದಾರೆ. ಇದೀಗ ವೆನ್ಲಕ್ ನ ವೈದ್ಯಾಧಿಕಾರಿ ಡಾ . ರಾಜೇಶ್ವರಿಯವರನ್ನು ವರ್ಗಾವಣೆ ಮಾಡಲಾಗಿದ್ದು , ಅವರ ಜಾಗಕ್ಕೆ ಹೊಸ ಡಿ ಎಚ್ ಓ ಸದಾಶಿವ ಅವರನ್ನು ನೇಮಿಸಲಾಯಿತು.

Leave a Reply

Your email address will not be published. Required fields are marked *

error: Content is protected !!