ಡಿಕೆಶಿ ಕಸ್ಟಡಿ, ಕೋರ್ಟ್ ನಿರ್ಧಾರ ಆಶ್ಚರ್ಯಕರ : ವಿಶ್ವಾಸ ಶೆಟ್ಟಿ

ಕುಂದಾಪುರ : ಡಿ ಕೆ ಶಿವಕುಮಾರ್ ರವರನ್ನು ಇಡಿ ಸತತ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದೆ. ಈಗಾಗಲೇ ಅವರ ಮೇಲೆ ಇರುವ ಮೂರು ಪ್ರಕರಣ ರದ್ದಾಗಿದೆ. ಈ ಪ್ರಕರಣ ಸಂಬಂದಿಸಿದಂತೆ ಐ ಟಿ ಪ್ರಕರಣಗಳಲ್ಲಿ ಸ್ಟೇ ಕೂಡ ಇದೆ. ಇಡಿ ವಿಚಾರಣೆಗೆ ಎಲ್ಲಾ ರೀತಿಯಾ ಸಹಕಾರವನ್ನು ಡಿಕೆಶಿ ನೀಡಿದ್ದಾರೆ. ಈಗ ಡಿಕೆಶಿ ಅರೋಗ್ಯದಲ್ಲಿ ಸಮಸ್ಯೆ ಉಂಟಾಗಿದ್ದು, ಬಿಪಿ ಶುಗರ್ ಇನ್ನಿತರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಊಟವನ್ನು ನೀಡಿಲ್ಲ. ಇದೆಲ್ಲರ ನಡುವೆ ಕಸ್ಟಡಿಗೆ ಕೋರ್ಟ್ ಕೊಟ್ಟಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕದ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ವಿಶ್ವಾಸ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಅರ್ಥಿಕ ಹಿಂಜರಿತ ಉಂಟಾಗಿದ್ದು ಅದನ್ನು ಮರೆಮಾಚಲು ಹಾಗೂ ಆಪರೇಷನ್ ಕಮಲಕ್ಕೆ ಡಿಕೆಶಿ ಅಡ್ಡಿಯಾಗಿದ್ದರು. ಅದ್ದರಿಂದ ವ್ಯವಸ್ಥತಿತ ಷಡ್ಯಂತರ ನಡೆಸಿ ಇಡಿಯನ್ನು ಬಳಸಿಕೊಂಡು ಡಿಕೆಶಿಯವರನ್ನು ಸಿಲುಕಿಸಿದೆ. ಸತ್ಯಕ್ಕೆ ಜಯ ಇದ್ದರೆ ಖಂಡಿತವಾಗಿ ಹೊರಬರುತ್ತಾರೆ ಎಂಬ ವಿಶ್ವಾಸವಿದೆ.

ಕೊಲೆ ಅರೋಪದಲ್ಲಿ ಜೈಲಿಗೆ ಹೋಗಿದ್ದ ಅಮಿತ್ ಷಾ ಕೈಯಲ್ಲಿ ದೇಶದ ಅದಿಕಾರ ಇದ್ದು, ವಿರೋಧ ಪಕ್ಷಗಳ ಪಾಲಿಗೆ ಇದೆಲ್ಲ ಸಾಮಾನ್ಯವಾಗಿದೆ. ಇಂತವರ ಕೈಯಿಂದ ದೇಶವನ್ನು ಕಾಪಾಡಲು ಕಾಂಗ್ರೆಸ್ ಕಾರ್ಯಕರ್ತರು ಇಂದಿನಿಂದ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಯಾರೋ ಬರೆದು ಕೊಟ್ಟ ಬಾಷಣವನ್ನು ಸಮರ್ಥವಾಗಿ ಮಾಡಲು ಸೀಮಿತ ಅಷ್ಟೇ. ಅವರು ಮಾದ್ಯಮಗಳ ಮುಂದೆ ಸುದ್ದಿಗೊಷ್ಟಿ ಮಾಡಲು ಹೆದರುತ್ತಿದ್ದಾರೆ. ಅವರಿಗೆ ಮಾದ್ಯಮದವರು ತಿರುಗಿಸಿ ಪ್ರಶ್ನೆ ಕೇಳಿದರೆ ಉತ್ತರಿಸುವ ಸಾಮರ್ಥ್ಯ ಅವರಲ್ಲಿ ಇಲ್ಲ. ಅದ್ದರಿಂದ ಮಾದ್ಯಮಗಳ ಎದುರಿಗೆ ಬರುತ್ತಿಲ್ಲ.

ಪ್ರದಾನಿ ಮೋದಿ ತಲೆಯಲ್ಲಿ ಯಾವುದೇ ಬಂಡವಾಳ ಇಲ್ಲ ಅದ್ದರಿಂದ ದೇಶ ಅರ್ಥಿಕತೆ ದಿವಾಳಿತನದ ಕಡೆಗೆ ಸಾಗಿದೆ. ಪ್ರತಿ ವರ್ಷ ಒಂದುವರೇ ಕೋಟಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಐದು ಹತ್ತು ಲಕ್ಷ ಸಾಲ ಮಾಡಿ ತಂದೆ ತಾಯಿ ಮಕ್ಕಳಿಗೆ ವಿದ್ಯಾಬ್ಯಾಸ ಮಾಡಿಸಿ ಮಕ್ಕಳಿಗೆ ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಕೆಲವರು ಕೆಲಸ ಕಳೆದುಕೊಂಡು ಬಂದು ಮನೆಯಲ್ಲಿ ಕುಳಿತುಕೂಳ್ಳುವ ಪರಿಸ್ಥಿತಿ ಬಂದಿದೆ. ಒಂದು ಕಡೆ ಬ್ಯಾಂಕ್ ನಲ್ಲಿ ವಿದ್ಯಾಬ್ಯಾಸಕ್ಕೆ ತೆಗೆದುಕೊಂಡ ಸಾಲಕ್ಕೆ ಬ್ಯಾಂಕ್ ನವರ ಕಿರುಕುಳ ಇದೆಲ್ಲ ಸಮಸ್ಯೆಯಿಂದ ಯುವಜನರ ಜೊತೆಗೆ ಪೋಷಕರು ನೊಂದು ಕೊಳ್ಳುವ ಪರಿಸ್ಥಿತಿ ಬಂದಿದೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿ ವಾರ್ಡಗಳಲ್ಲಿ ಕೆಲಸ ಕಳೆದುಕೊಂಡವರ ಪರಿಸ್ಥಿತಿ, ಕೆಲಸವಿಲ್ಲದೆ ಪರದಾಡುತ್ತಿದ್ದ ಯುವಕರ ಮತ್ತು ಅವರ ಪೋಷಕರ ಪರಿಸ್ಥಿತಿ, ನಿಮ್ಮ ವಾರ್ಡನಲ್ಲಿ ಸಮಸ್ಯೆ ಎದುರಿಸುತ್ತಿರುವ ಯುವಕರ ಅವರ ಪೋಷಕರ ಸಮಸ್ಯೆಯನ್ನು ಪ್ರತಿಯೊಬ್ಬರಿಗೂ ತಿಳಿಸುವ ಮೂಲಕ ಜನ ವಿರೋಧಿ ಪ್ರಜಾಪ್ರಭುತ್ವ ವಿರೋಧಿ ಸರಕಾರಗಳನ್ನು ಕಿತ್ತುಒಗೆಯಬೇಕು ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕದ ಉಡುಪಿ ಜಿಲ್ಲೆಯ ಅಧ್ಯಕ್ಷರಾದ ವಿಶ್ವಾಸ ಶೆಟ್ಟಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!