ಬಿಜೆಪಿ ಐಟಿಸೆಲ್ ನ ಜಿಲ್ಲಾ ಸಂಚಾಲಕ ಮಾಧವ ಮುದ್ರಾಡಿ ವಿಧಿವಶ

ಕಾರ್ಕಳ – ಬಿಜೆಪಿ ಐಟಿಸೆಲ್ ನ ಜಿಲ್ಲಾ ಸಂಚಾಲಕ ಮಾಧವ ಮುದ್ರಾಡಿ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ನಿನ್ನೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು…
ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯಾಗಿ, ಗೋವು ಕಳ್ಳರ ವಿರುದ್ಧ ಚಲೋ ಮುದ್ರಾಡಿ ಕಾರ್ಯಕ್ರಮ ಮಾಡಿ ಗೋ ಕಳ್ಳರ ಪಾಲಿಗೆ ಸಿಂಹ ಸ್ವಪ್ನ ರಾಗಿದ್ದರು .ತನ್ನ ವಿಶಿಷ್ಟ ಮೀಸೆಯ ಮೂಲಕ ಉಡುಪಿಯ ಅಭಿನಂದನ್ ಎಂದು ಕರೆಸಿಕೊಳ್ಳುತ್ತಿದರು,..

 

ಒಬ್ಬ ಉತ್ತಮ ಬರಹಗಾರರು ಆಗಿದ್ದ ಇವರು ತನ್ನ ವಿಶಿಷ್ಟ ಬರವಣಿಗೆಯ ಶೈಲಿಯ ಮೂಲಕ ಸಮಾಜದ ಹಲವು ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದು ಸಂಬಂಧ ಪಟ್ಟವರ ಗಮನ ಸೆಳೆಯುತ್ತಿದ್ದರು….
ಅವಿವಾಹಿತರಾದ ಇವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ, ಇವರ ಅಕಾಲಿಕ ಮರಣಕ್ಕೆ ಉಡುಪಿ ಶಾಸಕ ರಘುಪತಿ ಭಟ್ , ಕಾರ್ಕಳ ಶಾಸಕ ಸುನಿಲ್ ಕುಮಾರ್ , ಸಂಸದೆ ಶೋಭಾ ಕರಂದ್ಲಾಜೆ ಹಾಗು ವಿವಿಧ ಬಿಜೆಪಿ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ..

Leave a Reply

Your email address will not be published. Required fields are marked *

error: Content is protected !!