ದೊಡ್ಡಣಗುಡ್ಡೆ: ವಿಷ್ಣುಮೂರ್ತಿ ಫ್ರೆಂಡ್ಸ್ ವತಿಯಿಂದ 40 ಮನೆಗಳಿಗೆ ಆಹಾರ ಸಾಮಗ್ರಿ ವಿತರಣೆ

ಉಡುಪಿ: ದೇಶದಲ್ಲೆಡೆ ಲಾಕ್ ಡೌನ್ ಇರುವುದರಿಂದ ಬಡಜನರ ಸ್ಥಿತಿಗತಿಗಳನ್ನು ಮನಗಂಡು ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣಗುಡ್ಡೆ ವತಿಯಿಂದ ಸುಮಾರು 40 ಮನೆಗಳಿಗೆ ಅಂದಾಜು ಮೊತ್ತ 35,000 ರೂ. ಗಳ ದಿನಸಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ದಾನಿಗಳಾದ ಭಾಸ್ಕರ್ ಶೇರಿಗಾರ್ ಕಡಿಯಾಳಿ, ಸುರೇಶ್ .ಟಿ. ನಾಯಕ್ ದೊಡ್ಡಣಗುಡ್ಡೆ, ಉಮೇಶ್ ಆಚಾರ್ಯ, ಶೇಖರ್ ಜತ್ತನ್ ದೊಡ್ಡಣಗುಡ್ಡೆ, ಶ್ರೀನಾಥ್ ಭಟ್, ದಿನೇಶ್ ಡಿ, ಹಾಗೂ ಸಂಘದ ಅಧ್ಯಕ್ಷರಾದ ಮಾಧವ ಆಚಾರ್ಯ, ಕಾರ್ಯದರ್ಶಿಯಾದ ರಾಮು ಆಚಾರ್ಯ, ಗೌರವ ಸಲಹೆಗಾರರಾದ ಅಣ್ಣಪ್ಪ ಪೂಜಾರಿ, ಸತೀಶ್ ಪುತ್ರನ್, ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!