ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯ: ಎಸ್‌ಡಿಪಿಐ  ಮನವಿ

ಬಂಟ್ವಾಳ: ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಎಸ್‌ಡಿಪಿಐ ಮಂಚಿ ವಲಯ ಸಮಿತಿ ವತಿಯಿಂದ ಶುಕ್ರವಾರ ಪಂಚಾಯತ್ ಅಭಿವೃದ್ಧಿ ಅವರಿಗೆ ಮನವಿ ಸಲ್ಲಿಸಲಾಯಿತು. ಹೆಗಡೆ ರಸ್ತೆ ದುರಸ್ತಿ, ಕುಕ್ಕಾಜೆ ಜಂಕ್ಷನ್‌ನಲ್ಲಿ ಹೊಸ ಶೌಚಾಲಯ ನಿರ್ಮಾಣ, ಚೆಕ್‌ಪೋಸ್ಟ್ ಬಳಿ ಹೈಮಾಸ್ಕ್ ಸೋಲಾರ್ ಅಳವಡಿಕೆ ಹಾಗೂ ಕೆಟ್ಟುಹೋದ ದಾರಿ ದೀಪಗಳನ್ನು ಸರಿಪಡಿಸುವಂತೆ ಮನವಿ ಮೂಲಕ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಮಂಚಿ ಹೋರಾಟ ಸಮಿತಿ ಅಧ್ಯಕ್ಷ ನವಾಜ್ ಕೋಡಿಬೈಲ್, ಎಸ್‌ಡಿಪಿಐ ಮಂಚಿ ವಲಯ ಸಮಿತಿ ಅಧ್ಯಕ್ಷ ಫೈಝಲ್ ಮಂಚಿ, ಕಾರ್ಯದರ್ಶಿ ಜಬ್ಬಾರ್ ಮಂಚಿ, ಸಮಾಜಿಕ ಕಾರ್ಯಕರ್ತ ಕುಕ್ಕಾಜೆ ಮೋನು, ಸುಫೈದ್ ಕುಕ್ಕಾಜೆ, ಶರೀಫ್ ಕುಕ್ಕಾಜೆ, ಹಾರೂನ್ ಕುಕ್ಕಾಜೆ, ಡಿ.ಎನ್. ಫಾರೂಕ್ ಮಂಚಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!