ಸ್ವರ್ಣೋದ್ಯಮಿ ಕೋಣಿ ವಾಸುದೇವ ಶೇಟ್ ನಿಧನ

ಉಡುಪಿ – ಉಡುಪಿ ಸ್ವರ್ಣೋದ್ಯಮಿ ಕೋಣಿ ವಾಸುದೇವ ಶೇಟ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು (ಗುರುವಾರ) ಬೆಳಗಿನ ಜಾವ 2.30ಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಉಡುಪಿ ರಥಬೀದಿಯ ಕೆ. ವಾಸುದೇವ ಶೇಟ್ ಜ್ಯುವೆಲ್ಲರ್ಸ್‌ನ ಮಾಲಕರಾಗಿದ್ದ ವಾಸುದೇವ ಶೇಟ್, ಚಿನ್ನದ ಆಭರಣಗಳ ವ್ಯವಹಾರ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರು ಅಪಾರ ಬಂಧು ಬಳಗವನ್ನಗಲಿದ್ದಾರೆ.
ಮೃತದೇಹವನ್ನು ಮದ್ಯಾಹ್ನ 12 ಗಂಟೆಗೆ ವಾದಿರಾಜ ರಸ್ತೆಯಲ್ಲಿರುವ ಮೃತರ ಸ್ವಗೃಹಕ್ಕೆ ತರಲಾಗುತ್ತಿದ್ದು, ಅಪರಾಹ್ನ 2 ಗಂಟೆವರೆಗೆ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುವುದು.

Leave a Reply

Your email address will not be published. Required fields are marked *

error: Content is protected !!