ಮೀನುಗಾರರ ಸಾಲಮನ್ನಕ್ಕೆ  ಮುಖ್ಯ ಮಂತ್ರಿ ಅಂಕಿತ : ಯಶ್ಪಾಲ್ ಸುವರ್ಣ ಅಭಿನಂದನೆ

ಮೀನುಗಾರರ ಬಹುದಿನದ ನಿರೀಕ್ಷೆಯಾಗಿದ್ದ  ಸಾಲಮನ್ನ ಬೇಡಿಕೆಯನ್ನು ಪುರಸ್ಕರಿಸಿ  ಮೀನುಗಾರರ ಹಾಗೂ ಮಹಿಳಾ ಮೀನುಗಾರರ ಸುಮಾರು 60 ಕೋಟಿ ಸಾಲವನ್ನು ಮನ್ನಾ ಯೋಜನೆಗೆ ಅಂಕಿತ  ಹಾಕಿರುವ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ರವರಿಗೆ  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಶ್ರೀ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
 ಮುಖ್ಯಮಂತ್ರಿಯಾಗಿ  ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮೀನುಗಾರರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳುವ ಮೂಲಕ ಮೀನುಗಾರರಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
  ಈ ಸಾಲಮನ್ನ ಯೋಜನೆಗೆ ಸಹಕರಿಸಿದ ಕರಾವಳಿಯ ಎಲ್ಲಾ ಶಾಸಕರಿಗೂ ಹಾಗೂ ಸಂಸದರಿಗೆ ಸಮಸ್ತ ಮೀನುಗಾರರ ಪರವಾಗಿ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!