ಬ್ರಹ್ಮಾವರ: ಕೆರೆಗೆ ಈಜಲು ಹೋದ ಇಬ್ಬರ ಸಾವು

ಬ್ರಹ್ಮಾವರ: ಚಾಂತಾರು ಗ್ರಾಮದ ಮದಗಕ್ಕೆ ಸ್ನಾನಕ್ಕೆ ತೆರಳಿದ ಇಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಚಾಂತಾರುವಿನ ಮಹಾಬಲ ನಾಯ್ಕ್‌ರ ಮಗ ಮಹೇಶ್ ‌ (21) ಹಾಗೂ ಇವರ  ಹೆಂಡತಿಯ ತಮ್ಮ ಚಂದ್ರಶೇಖರವರ ಮಗ ನಿಶಾಂತ(12) ಗುರುವಾರದಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ಮ 1:25 ರ ಮಧ್ಯೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾರೆ. ಸ್ಥಳೀಯರು ನೀರಿನ ಆಳದಿಂದ ಮೇಲಕ್ಕೆತ್ತಿ ಬ್ರಹ್ಮಾವರ ಮಹೇಶ್‌‌ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವ   ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

Leave a Reply

Your email address will not be published. Required fields are marked *

error: Content is protected !!