ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಬಿಜೆಪಿ ಗೇಟ್ ಓಪನ್ ಇದೆ : ರಘುಪತಿ ಭಟ್

ಮಾಜಿ ಸಚಿವ ಪ್ರಮೋದ್ ಮಧ್ವರಾಜ್  ಬಿಜೆಪಿ ಪಕ್ಷಕ್ಕೆ ಅರ್ಜಿ ಹಾಕಿದರೆ ಪಕ್ಷವು ಅದನ್ನು  ಸ್ವೀಕರಿಸುತ್ತದೆ . ಕೇಂದ್ರ ,ರಾಜ್ಯ ದ ಹಿರಿಯ ಮುಖಂಡರು  ಪ್ರಮೋದ್ ಮಧ್ವರಾಜ್ ಅವರ ಸೇರ್ಪಡೆ ಬಗ್ಗೆ  ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಶಾಸಕ ಕೆ. ರಘುಪತಿ  ಭಟ್ ಹೇಳಿದರು .

ಈ ಹಿಂದೆ ಅವರು ಜೆಡಿಎಸ್ ಪಕ್ಷದಿಂದ ಮೈತ್ರಿ ಅಭ್ಯರ್ಥಿಯಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ  ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿ ಪರಾಭವಗೊಂಡ ನಂತರದ ಪ್ರಮೋದ್ ಮಧ್ವರಾಜ್  ಯಾವ ಪಕ್ಷದಲ್ಲಿ ಇದ್ದಾರೆ ಎಂಬ ಸಂದೇಹ ಎಲ್ಲರಲ್ಲಿ ಇತ್ತು . ಕಳೆದ ವಾರ ಅವರು ಜೆಡಿಎಸ್  ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಅರ್ಜಿ ಹಾಕಿದರೆ ಪಕ್ಷದ ಹೈಕಮಾಂಡ್ ಅದನ್ನು ಪರಿಗಣಿಸಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನೋಡಬೇಕು ಎಂದು ಉಡುಪಿ ಶಾಸಕ ಕೆ ರಘುಪತಿ  ಭಟ್,  ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ    ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು . ಸದ್ಯ ಪ್ರಮೋದ್ ಮಧ್ವರಾಜ್ ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿಲ್ಲ, ಅವರು ಬಿಜೆಪಿಗೆ ಅಥವಾ ಕಾಂಗ್ರೆಸ್ಸಿಗೆ ಅರ್ಜಿ ಹಾಕುತ್ತಾರೆ ಎಂದು ಕಾದು ನೋಡುತ್ತೇವೆ ಎಂದು ಈ ಸಂದರ್ಭ ಭಟ್ ಹೇಳಿದರು .

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ ,ಗಿರಿಧರ ಆಚಾರ್ಯ ಉಪಸ್ಥಿತರಿದ್ದರು. 

1 thought on “ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಬಿಜೆಪಿ ಗೇಟ್ ಓಪನ್ ಇದೆ : ರಘುಪತಿ ಭಟ್

Leave a Reply

Your email address will not be published. Required fields are marked *

error: Content is protected !!