ಬಹರೇನ್ ಬಿಲ್ಲವಾಸ್ – ಗೆಜ್ಜೆಗಿರಿ ಕ್ಷೇತ್ರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


ಬಹರೇನ್- ಅನಿವಾಸಿ ಬಿಲ್ಲವರ ಸಂಘಟನೆಯಾದ ಗುರುಸೇವೆ ಸಮಿತಿ ಬಹರೇನ್ ಬಿಲ್ಲವಾಸ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲು ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ತಾ.20.02.2020 ರಂದು ಬಹರೇನ್ ಬಿಲ್ಲವಾಸ್ ಅಧ್ಯಕ್ಷರಾದ ಸುರೇಂದ್ರ ಉದ್ಯಾವರ ಅವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇತ್ರದಲ್ಲಿ ಗುರು ಸಾಯನ ಬೈದ್ಯರ ಪೀಠವನ್ನು ಬಹರೇನ್ ಬಿಲ್ಲವಾಸ್ ವತಿಯಿಂದ ನಿರ್ಮಿಸಲಾಗಿದ್ದು, ಇದು ಪುನರುತ್ಥಾನವಾಗಿ ಬ್ರಹ್ಮಕಲಶೋತ್ಸವದ ಸುಸಂದರ್ಭದಲ್ಲಿದೆ. ಈ ಸಂದರ್ಭದಲ್ಲಿ ಬಹರೇನ್ ಬಿಲ್ಲವಾಸ್ ಮಾಜಿ ಅಧ್ಯಕ್ಷರುಗಳಾದ ರಾಜಕುಮಾರ್, ಕೃಷ್ಣ ಸುವರ್ಣ, ರಾಘು ಪೂಜಾರಿ ಹಾಗು ಹಿರಿಯರಾದ
ಶಂಕರ ಜತ್ತನ್ನ, ಸತೀಶ್ ಅಂಚನ್, ಹರೀಶ್ ಪೂಜಾರಿ ಹಾಗು ಮಹಿಳಾ ಸಂಘಟಕರುಗಳಾದ ಲೋಲಾಕ್ಷಿ ರಾಜಾರಾಮ್,ತ್ರಿವೇಣಿ ಗಣೇಶ್, ವಿದ್ಯಾ ಪುರುಷೋತ್ತಮ್ ಹಾಗು ಪ್ರತಿಮರಾಜ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!