ಫೋಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಕೊರೊನ ವೈರಸ್ ಬಗ್ಗೆ ಜನಜಾಗೃತಿ

ಉಡುಪಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯದ ವತಿಯಿಂದ ಮಾರಕ ರೋಗ ಕೊರೊನ ವೈರಸ್ ಬಗ್ಗೆ ಜನಜಾಗೃತಿಗಾಗಿ ಹಂಚುವುದಕ್ಕಾಗಿ 5000 ಮುದ್ರಿತ ಕರಪತ್ರಗಳನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಹಾಗೂ ಜಿಲ್ಲಾ ಪೊಲೀಸ್ ಉಪಾಧೀಕ್ಷಕರಾದ ಕುಮಾರ ಚಂದ್ರ ಬಿಡುಗಡೆಗೊಳಿಸಿದರು .

ಮಂಗಳವಾರ ನಗರದಾದ್ಯಂತ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಉಡುಪಿ ವಲಯ ಅಧ್ಯಕ್ಷರಾದ ಪ್ರಕಾಶ್ ಕೊಡಂಕೂರು ಕಾರ್ಯದರ್ಶಿ ಸುಖೇಶ್ ಅಮೀನ್,  ಗೌರವಾಧ್ಯಕ್ಷ ಶಿವ ಕೆ. ಅಮೀನ್ ಜಿಲ್ಲಾ ಸಂಘಟನೆಯ ಸಲಹಾ ಸಮಿತಿ ಸದಸ್ಯ ಜಯಕರ ಸುವರ್ಣ,  ಜಿಲ್ಲಾ ಮಾಧ್ಯಮ ವಕ್ತಾರ ಜನಾರ್ದನ್ ಕೊಡವೂರು,  ವಲಯ ಸದಸ್ಯರಾದ ಮಹೇಶ್ ಸುವರ್ಣ,  ಸಬೆಸ್ಟಿನ್ ಅಂಚನ್,  ಸತೀಶ್ ಸೇರಿಗಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!