ವಿಷ ಸೇವಿಸಿ ಆತ್ಮಹತ್ಯೆ ಯತ್ನ – ಚಿಕೆತ್ಸೆ ಫಲಕಾರಿಯಾಗದೆ ಭೂ ಮಾಪನ ಅಧಿಕಾರಿ ಸಾವು

ಉಡುಪಿ: ಸಹೋದ್ಯೋಗಿಗಳ ಕಿರುಕುಳ ತಡೆಯಲಾರದೆ ಜುಲಾಯಿ 28 ರಂದು ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನಿಸಿದ್ದ ಬ್ರಹ್ಮಾವರದ ಭೂ ಮಾಪನ ಇಲಾಖೆಯ ಭೂ ಮಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಶೋಕ  ಎಲ್‌. ಬೈರವಾಡಗಿ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 1 ರಂದು ಕೊನೆ ಉಸಿರೆಳೆದ್ದಿದ್ದಾರೆ.

ಮೃತ ಅಶೋಕ  ಎಲ್‌. ಬೈರವಾಡಗಿ ಕಳೆದ 9 ವರ್ಷದಿಂದ  ಬ್ರಹ್ಮಾವರದ ಭೂಮಾಪನ ಇಲಾಖಾ ಕಚೇರಿಯಲ್ಲಿ ಭೂಮಾಪಕರಾಗಿ  ಕರ್ತವ್ಯ ನಿರ್ವಹಿಸಿಕೊಂಡಿದ್ದವರು ಕಚೇರಿಯ ಸಹೋದ್ಯೋಗಿಗಳ ಕಿರುಕುಳದಿಂದ ಬೇಸತ್ತು, ಜುಲಾಯಿ 28 ರಂದು ರಂದು ಉಡುಪಿ ಅಜ್ಜರಕಾಡು ಪಾರ್ಕ್ ನಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ  ಅತ್ಮಹತ್ಯೆಗೆ ಪ್ರಯತ್ನಿಸಿದವರನ್ನು  ಸಮಾಜ ಸೇವಕರಾದ ವಿಶು ಶೆಟ್ಟಿಯವರು  ಅಜ್ಜರಕಾಡು ಜಿಲ್ಲಾ ಅಸ್ಪತ್ರೆಗೆ ಪ್ರಥಮ ಚಿಕಿತ್ಸೆ ಬಗ್ಗೆ  ದಾಖಲಿಸಿದ್ದು,  ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಅದೇ ದಿನ ಮಣಿಪಾಲ ಕೆಎಂಸಿ ಅಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 1 ರಂದು ರಾತ್ರಿ 10:30 ಕ್ಕೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!