ಫಾರಂ ಫೀಝ ಮಾಲ್ ನಲ್ಲಿ ಹಲ್ಲೆ:ಬಜರಂಗದಳ ಮುಖಂಡರ ಭೇಟಿ

ಮಂಗಳೂರು: ಫಾರಂ ಫೀಝ ಮಾಲ್ ನಲ್ಲಿ ಹಿಂದೂ ಯುವಕನ ಹಲ್ಲೆ ಮಾಡಿದವರ ಮೇಲೆ ಕೇಸು ದಾಖಲಿಸಿದಕ್ಕೆ ವಿಶ್ವಹಿಂದೂ ಪರಿಷದ್ ಬಜರಂಗದಳ ಸ್ವಾಗತಿಸಿದೆ. ಹಲ್ಲೆಗೆ ಒಳಗಾದ ಬಂಟ್ವಾಳ ತಾಲ್ಲೂಕಿನ ಮಂಜುನಾಥ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆಯುತ್ತಿದ್ದು , ವಿಶ್ವಹಿಂದೂ ಪರಿಷದ್ ಬಜರಂಗದಳ ಮುಖಂಡರು ಮನೆಯವರ ಭೇಟಿಯಾಗಿ ನೈತಿಕ ಧೈರ್ಯ ತುಂಬಿದರು.

ಮಂಗಳೂರಿನ ಮಾಲ್ ಲ್ಲಿ ಯುವಕನೋರ್ವನಿಗೆ ಥಳಿಸಿದ ಹಿನ್ನೆಲೆ, ತಕ್ಷಣ ಸಂಬಂಧಿತರ ಮೇಲೆ ಕ್ರಮ ಕೈಗೊಳ್ಳುವಂತೆ ಮಂಗಳೂರು ಸಿಟಿ ಪೋಲಿಸ್ ಕಮಿಷನರ್ ಅವರಿಗೆ ಸೂಚಿಸಲಾಗಿದೆ. ಸೂಕ್ತ ಕ್ರಮ ಕೈಗೊಂಡ ಕುರಿತು ಮಾಹಿತಿ ದೊರಕಿದೆ. ಶಾಂತಿ ಸುವ್ಯವಸ್ಥೆಗೆ ಜಿಲ್ಲಾಡಳಿತ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!