ನೆರೆ ಪರಿಹಾರ ರಾಜ್ಯಕ್ಕೆ 500 ಕೋಟಿ ರೂ ಬಿಡುಗಡೆ:ಅಶೋಕ್

ಬೆಂಗಳೂರು: ಕಂದಾಯ ಸಚಿವ ಆರ್ ಅಶೋಕ್ ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು 500 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಗೆ 25 ಕೋಟಿ ರೂ ಮತ್ತು ಉಡುಪಿ ಜಿಲ್ಲೆಗೆ 25 ಕೋಟಿ ರೂ ಪರಿಹಾರ ಘೋಷಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರವಾಹದಿಂದ ಹಾನಿಗೊಳಗಾಗಿರುವ ಸೊತ್ತುಗಳ ಪುನಃ ಸ್ಥಾಪನೆಗಾಗಿ ರಸ್ತೆ, ಶಾಲಾ ಕಟ್ಟಡ ಸಹಿತ ಮೂಲ ಸೌಕರ್ಯ ಕಾಮಗಾರಿಗಳಿಗೆ 500 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಭೂಕುಸಿತವಾಗಿರುವ ಜಾಗವನ್ನು ಸರಕಾರಿ ಜಮೀನಾಗಿ ಮಾರ್ಪಾಡು ಮಾಡುತ್ತೆವೆ. ಸಂತ್ರಸ್ತರಿಗೆ ಮೂಡಿಗೆರೆ ಹೋಬಳಿಯಲ್ಲಿ ಜಾಮೀನು ಗುರುತುಸಲಾಗಿದೆ. ಕೊಡಗಿನಲ್ಲೂ ಇದೆ ಮಾದರಿಯಲ್ಲಿ ಜಾಮೀನು ಕೊಡಲಿದ್ದೇವೆ ಎಂದು ತಿಳಿಸಿದರು.
ತಾಂತ್ರಿಕ ಕಾರಣಗಳಿಂದಾಗಿ ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗಲಿದೆ. ಅದು ಬಂದ ತಕ್ಷಣ ಬೆಲೆ ವಿಮೆ ಹಣ ಬಿಡುಗಡೆ ಮಾಡಲಾಗುವುದು ಎಂದು ಅಶೋಕ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!