5 ಕಿಲೋ ಗಾಂಜಾ ವಶ ಓರ್ವನ ಬಂಧನ

ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ನಿರೀಕ್ಷಕ ಸೀತಾರಾಮ್ ಅವರಿಗೆ ಬಂದ ಖಚಿತ ಮಾಹಿತಿಯಿಂದ  ಮಣಿಪಾಲದ ವಿದ್ಯಾರತ್ನ ನಗರದ ವಸತಿ ಸಮುಚ್ಛಯದ  ಬಳಿ ಗಾಂಜಾ  ಮಾರಾಟ ಮಾಡಲು ಯತ್ನಿಸುತ್ತಿದ್ದ   ಪಶ್ಚಿಮ  ಬಂಗಾಳ ಮೂಲದ ಪ್ರಖಾರ್ ಶ್ರೀವಾಸ್ತವ  (24 ) ಎಂಬಾತನನ್ನು ಮಂಗಳವಾರ ಮಧ್ಯಾಹ್ನ ಬಂಧಿಸಿರುತ್ತಾರೆ.

ಬಂಧಿತನಿಂದ   5 .28 ಕೆಜಿ ತೂಕದ  ಸುಮಾರು  1  ಲಕ್ಷ 30  ಸಾವಿರ ಮೌಲ್ಯದ ಗಾಂಜಾ,  5  ಸಾವಿರ ಮೌಲ್ಯದ ಮೊಬೈಲ್ , 1,250 ರೂ  ಮೌಲ್ಯದ ತೂಕ ಯಂತ್ರ ಸಹಿತ ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯ ಚರಣೆಯಲ್ಲಿ ಸೆನ್ ಪೊಲೀಸ್ ನಿರೀಕ್ಷಕರಾದ ಸೀತಾರಾಮ್ ಎ .ಎಸ್. ಐ ಕೇಶವ್ ಗೌಡ ಸಿಬ್ಬಂದಿಗಳಾದ ಸತೀಶ್ ಬೆಳ್ಳೆ ರಾಘವೇಂದ್ರ ಉಪ್ಪುರು, ಕೃಷ್ಣ ಪ್ರಸಾದ್ , ಸಂಜಯ್ ,ನಾಗೇಶ್ ,ಶ್ರೀಧರ್ ,ರಾಘವೇಂದ್ರ ಬ್ರಹ್ಮಾವರ , ಪ್ರಸನ್ನ ಸಾಲಿಯಾನ್ , ಸಂತೋಷ್ ಖಾರ್ವಿ , ಪ್ರವೀಣ್ ಮತ್ತು ಜೀವನ್ ಪಾಲ್ಗೊಂಡಿದ್ದಾರೆ …

Leave a Reply

Your email address will not be published. Required fields are marked *

error: Content is protected !!