ಸಂಶಾಯಾಸ್ಪದ ವಿದೇಶಿ ಪ್ರಜೆಯ ಬಂಧನ

ಕಾರವಾರ: ಇಲ್ಲಿನ ಅರಣ್ಯ ಪ್ರದೇಶದಲ್ಲಿ ನಿಷೇದಿತ ಸ್ಯಾಟ್ ಲೈಟ್ ಫೋನ್ ನಿಂದ ಕರೆಗಳು ಹೋಗಿದ್ದವು ಎನ್ನುವ ವಿಷಯ ಜಿಲ್ಲೆಯಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿದ್ದು ಮತ್ತು ಜಿಲ್ಲೆಯ ಕೈಗಾ, ಕದಂಬ ನೌಕಾನೆಲೆಯ ಮೇಲೆ ಉಗ್ರರ ಕಣ್ಣು ಬಿದ್ದಿದೆಯೇ ಅನ್ನುವ ಅನುಮಾನ ಜಿಲ್ಲೆಯ ಜನರಲ್ಲಿ ಕಾಡ ತೊಡಗಿತ್ತು. ಇದೀಗ ಮತ್ತೆ ಕದಂಬ ನೌಕದಳದ ಅಧಿಕಾರಿಗಳೂ ಓರ್ವ ಅಪರಿಚಿತ ವಿದೇಶದ ವ್ಯೆಕ್ತಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಕಾರವಾರ ವ್ರತ್ತ ನಿರೀಕ್ಷಕರ ಕಛೇರಿಯಲ್ಲಿ ಗೋಪ್ಯವಾಗಿ ಡಿ.ವೈ.ಎಸ್.ಪಿ ಶಂಕರ ಮಾರಿಹಾಳ ಅವರ ತಂಡದ ಜೊತೆ ಅಪರಿಚಿತ ವ್ಯಕ್ತಿಯನ್ನು ನೌಕದಳದ ಸಿಬ್ಬಂದಿಗಳು ಕೂಡ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!