ಉಪ್ಪೂರಿನಲ್ಲಿ ನಡೆದ ಟಿಪ್ಪರ್ ಮಗುಚಿ ಬಿದ್ದ ಘಟನೆ ಯಲ್ಲಿ ಮತ್ತೋರ್ವ ಮೃತ

ಇಂದು ಬೆಳಿಗ್ಗೆ ಉಪ್ಪೂ ರಿನಲ್ಲಿ ನಡೆದ ಟಿಪ್ಪರ್ ಮಗುಚಿ ಬಿದ್ದ ಘಟನೆ ಯಲ್ಲಿ ಮತ್ತೋರ್ವ ಮೃತ.

ಉಪ್ಪೂ ರಿನಿಂದ ಉಡುಪಿ ಕಡೆ ಬರುತ್ತಿದ್ದ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪರಿಣಾಮ ಬ್ರಹ್ಮಾವರ ನಿವಾಸಿ ನಾಗರಾಜ ಗಾಣಿಗ ( 30)ಸ್ಥಳದಲ್ಲಿ ಮೃತಪಟ್ಟರೆ ,ಭಟ್ಕಳದ ಕುಮಾರ್(27) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾನೆ.

ರಾಘವೇಂದ್ರ(19) ತೀವ್ರ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಿಟಿ ಜಿಟಿ ಮಳೆ ಬರುತ್ತಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಉಪ್ಪೂರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!