ಉಡುಪಿ ಹಿರಿಯ ನಾಗರಿಕರ ವೇದಿಕೆಯ ವಾರ್ಷಿಕ ಮಹಾ ಸಭೆ

ಉಡುಪಿ ಹಿರಿಯ ನಾಗರಿಕರ ವೇದಿಕೆ ಇದರ ವಾರ್ಷಿಕ ಮಹಾ ಸಭೆಯು ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಶ್ರೀ ಭವಾನಿ ಮಂಟಪದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ ಮತ್ತು ಶ್ರೀಮತಿ ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ದಂಪತಿಗಳನ್ನು ಹಾಗೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಶ್ರೀ ಭುವನ ಪ್ರಸಾದ್ ಹೆಗ್ಡೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭಾಧ್ಯಕ್ಷರಾಗಿ ಡಾ. ನಿ ಬಿ ಬಲ್ಲಾಳ್ ಧರ್ಮದರ್ಶಿ ಶ್ರೀ ಜನಾರ್ದನ ಮಾಹಾ ಕಾಳಿ ದೇವಸ್ಥಾನ ಅಂಬಲಪಾಡಿ,ಉಡುಪಿ ಹಿರಿಯ ನಾಗರಿಕರ ವೇದಿಕೆ ಇದರ ಅಧ್ಯಕ್ಷರಾದ ಶ್ರೀ ಸಿ. ಎಸ್. ರಾವ್, ಗೌರವಾಧ್ಯಕ್ಷರಾದ ಶ್ರೀ ಎ.ಪಿ ಕೊಡಂಚ, ಉಪಾಧ್ಯಕ್ಷರಾದ ಶ್ರೀ ವಿಶ್ವನಾಥ ಹೆಗ್ಡೆ, ಕಾರ್ಯದರ್ಶಿ ಶ್ರೀ ಕೆ. ಸದಾನಂದ ಹೆಗ್ಡೆ,ಕೋಶಾಧಿಕಾರಿ ಶ್ರೀ ಶ್ರೀನಿವಾಸ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!