ಸೀತಾ ನದಿ ದಡದಲ್ಲಿ ವಿನೂತನ ಯೋಜನೆ ಚಿಗುರು ಪ್ರಕೃತಿ ಉಳಿವಿಗಾಗಿ

ಬ್ರಹ್ಮಾವರ: ಸೀತಾ ನದಿ ದಡದಲ್ಲಿ ಗಿಡ ನೆಡುವ ಕಾರ್ಯಕ್ರಮ ಚಿಗುರು- ಪ್ರಕೃತಿ ಉಳಿವಿಗಾಗಿ ಇದೇ ಭಾನುವಾರ ಜುಲೈ 14 ರಂದು ಮಧ್ಯಾಹ್ನ 3 ಗಂಟೆಗೆ ಮಾಬುಕಳ ಸೇತುವೆ ಬಳಿ ನಡೆಯಲಿದೆ. ಬಾಂಧವ್ಯ ಬ್ಲಡ್ ಕರ್ನಾಟಕ ಹಾಗೂ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ ಮತ್ತು ಜೇಸಿಐ ಕೋಟ ಬ್ರೀಗೇಡಿಯರ್ ಸಹಯೋಗದೊಂದಿಗೆ ನಡೆಯಲಿರುವ ಕಾರ್‍ಯಕ್ರಮ.

ನಾವು ಸೀತಾ ನದಿ ದಡವನ್ನು ಇತ್ತೀಚಿಗೆ 95% ನಷ್ಟು ಸ್ವಚ್ಛತೆ ಮಾಡಿದ್ದೇವೆ ತದನಂತರವೂ ತುಂಬಾ ವಿದ್ಯಾವಂತ ಅನಾಗರೀಕರು ಅಲ್ಲಲ್ಲಿ ಕಸವನ್ನು ಹಾಕಿದ್ದಾರೆ. ಈ ಕುರಿತು ಜನಜಾಗೃತೆಗಾಗಿ ಸೀತಾ ನದಿ ದಡದಲ್ಲಿ ಒಂದಿಷ್ಟು ಗಿಡ ನೆಡುವ ಯೋಚನೆ ಇದಾಗಿದೆ. ನಿಮ್ಮ ಮನೆಯಲ್ಲಿನ ಹೂವಿನ ಗಿಡದ ಹಸಿ ಗೆಲ್ಲನ್ನು ನೀಡುವುದರ ಮೂಲಕ ಈ ಅಭಿಯಾನಕ್ಕೆ ಆಸಕ್ತಿ ಇರುವವರು ಪ್ರೋತ್ಸಾಹ ನೀಡಬಹುದು ಎಂದು ಸೀತಾನದಿ ಉಳಿಸಿ ತಂಡ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!