ಅಲೆವೂರು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ‌

ಸದಸ್ಯತ್ವ ಅಭಿಯಾನದ ಪ್ರಯುಕ್ತ ಅಲೆವೂರು ಬಿಜೆಪಿ ಗ್ರಾಮ ಸಮಿತಿ ಸಭೆ ರಾಮಪುರ ಅಶೋಕ್ ಶೆಟ್ಟಿಗಾರ್ ಮನೆಯಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಗ್ರಾಮ ಸಮಿತಿ‌ಅಧ್ಯಕ್ಷರಾದ ಅಶೋಕ್ ಕುಮಾರ್ ವಹಿಸಿ ಅಲೆವೂರಿನಲ್ಲಿ ಪ್ರತೀ ಬೂತ್ ನಿಂದ ಕನಿಷ್ಠ 200 ಜನರ ಸದಸ್ಯತ್ವ ಮಾಡಿಸುವ ಮುಖೇನ ಕಾಪು ಕ್ಷೇತ್ರದ ಗುರಿ ಸಾಧಿಸಲು ನಾವೆಲ್ಲ ಒಟ್ಟಾಗಿ ಸಹಕರಿಸೋಣ ಎಂದು ವಿನಂತಿಸಿದರು.
ಸದಸ್ಯತ್ವ ಅಭಿಯಾನದ ಸಂಚಾಲಕರಾದ ಶ್ರೀಕಾಂತ ನಾಯಕ್  ಅಭಿಯಾನದ ಕುರಿತಂತೆ ವಿಸ್ತೃತ ಮಾಹಿತಿ ನೀಡಿ ಸಭೆಯಲ್ಲಿ ಹಾಜರಿದ್ದವರೆಲ್ಲರಿಗೆ ಮಿಸ್ ಕಾಲ್ ನೀಡಿ ಸದಸ್ಯತ್ವ ಮಾಡಿಸಿ ಚಾಲನೆ ನೀಡಲಾಯಿತು.ಎಲ್ಲ 10 ವಾರ್ಡ್ ಗಳಿಗೆ ಒಬ್ಬೊಬ್ಬರಾಗಿ ಜವಾಬ್ದಾರಿ ಹಂಚಲಾಯಿತು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮುರಳೀಧರ ಪೈ, ಸದಸ್ಯತ್ವ ಅಭಿಯಾನದ ಸಹಸಂಚಾಲಕರಾದ ಶಿಲ್ಪ ಜಿ ಸುವರ್ಣ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಜಯಲಕ್ಷ್ಮಿ ಉಪಸ್ಥಿತರಿದ್ದರು.
ರವಿ ಸೇರಿಗಾರ್ ಧನ್ಯವಾದ ಸಮರ್ಪಿಸಿದರು. ಪಂಚಾಯತ್ ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!