ಯುವತಿಗೆ ಚುಡಾವಣೆ : ದೊಡ್ಡಣಗುಡ್ಡೆ ಉದ್ರಿಕ್ತ

ಉಡುಪಿ: ಯುವತಿಗೆ ಚುಡಾಯಿಸಿದ ಅನ್ಯಕೋಮಿನ ಯುವಕರಿಗೆ ಹಲ್ಲೆ, ದೊಡ್ಡಣಗುಡ್ಡೆಯಲ್ಲಿ ಉದ್ರಿಕ್ತ ವಾತಾವರಣಾ ನಿರ್ಮಾಣ.
ಇಲ್ಲಿನ ವಿಜಯ ಅರ್ಪಾಟ್‌ಮೆಂಟ್‌ನಲ್ಲಿ ಐದು ಯುವತಿಯರು ಉಳಿದುಕೊಂಡಿದ್ದು ಅವರಿಗೆ ಸ್ಥಳೀಯ ಯುವಕರು ದಿನ ನಿತ್ಯ ತಮಾಷೆ ಮಾಡಿ ಚುಡಾಯಿಸುತ್ತಿದ್ದರು, ಇದನ್ನು ಪ್ರಶ್ನಿಸಿ ಇಂದು ರಾತ್ರಿ ೭.೧೦ ಗಂಟೆಗೆ ದೊಡ್ಡಣಗುಡ್ಡೆಯ ಯುವಕರು ಚುಡಾಯಿದ ಇಬ್ಬರಿಗೆ ಹಲ್ಲೆ ಮಾಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಕಾಡುಬೆಟ್ಟಿನ ಯುವಕರ ತಂಡವೊಂದು ಬಂದು ಸ್ಥಳೀಯ ಯುವಕರಿಗೆ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದೆ. ಎರಡು ತಂಡಗಳ ನಡುವಿನ ಹೊಡೆದಾಟವು ವಿಕೋಪಕ್ಕೆ ಹೋದ ಪರಿಣಾಮ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ.
ಸ್ಥಳೀಯರ ಪ್ರಕರ ಈ ಪ್ಲಾಟ್‌ನ ಯುವತಿ ಮತ್ತು ಅನ್ಯಕೊಮಿನ ಯುವಕನ ನಡುವೆ ಉಂಟಾದ ಪ್ರೇಮ ವಿಚಾರವಾಗಿ ಈ ಹೊಡೆದಾಟ ನಡೆದಿದೆ ಎನ್ನಲಾಗುತ್ತಿದೆ.
ಪೊಲೀಸರು ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!