ಉದ್ಯಾವರ ಸರಕಾರಿ ಪ್ರೌಢಶಾಲೆ : ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಭೇಟಿ

ಉದ್ಯಾವರ ಸರಕಾರಿ ಪ್ರೌಢಶಾಲೆಗೆ ಭಾರತ ಸರಕಾರದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿರುವ ಶ್ಯಾಮಲ ಕುಂದರ್ ಭೇಟಿ ನೀಡಿ ಕುಂದು ಕೊರತೆ ಗಳನ್ನು ಪರಿಶೀಲಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ನಿರ್ವಹಣೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಶ್ಯಾಮಲಾ ಕುಂದರ್ ಅವರನ್ನು ಸ್ವಾಮಿ ವಿವೇಕಾನಂದ ರವರ ಸ್ಮರಣಿಕೆಯನ್ನು ನೀಡಿ ಶಾಸಕ ಲಾಲಾಜಿ ಆರ್ ಮೆಂಡನ್ ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್, ತಾಲ್ಲೂಕು ಪಂಚಾಯಿತಿ ಸದಸ್ಯೆ ರಜನಿ ಆರ್ ಅಂಚನ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್, ಸದಸ್ಯರಾದ ಸರೋಜಾ, ವಾರಿಜಾ ಜಯಕುಮಾರ್, ಸಿಬಿಸಿ ಸದಸ್ಯರಾದ ವಿಜಯ್ ಕುಮಾರ್ ಉದ್ಯಾವರ,  ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಸಂತೋಷ್ ಡಿ ಸುವರ್ಣ ಬೊಳ್ಜೆ, ಶಿಕ್ಷಕ ರಕ್ಷಕ ಸಂಘದ ಪೂರ್ಣಿಮಾ ದಿನೇಶ್, ಸಿಡಿಪಿಒ ವೀಣಾ, ಪ್ರಾಂಶುಪಾಲರಾದ ಕಿಶೋರ್, ಮುಖ್ಯ ಶಿಕ್ಷಕಿ ಮೂಕಾಂಬೆ, ರಮೇಶ್ ಆಚಾರ್ಯ , ರವೀಂದ್ರ ನಾಯಕ್ ಶಿಕ್ಷಕರಿಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!