ಗಾಜನೂರು ಜಲಾಶಯದಿಂದ 2 – 5 ಸಾವಿರ ಕ್ಯುಸೆಕ್ಸ್ ನೀರು ಹೊರಕ್ಕೆ ಬಿಡುಗಡೆ

ಶಿವಮೊಗ್ಗ: ಈ ವರ್ಷ ಕೆಲವೊಂದು ಕಡೆಗಳಲ್ಲಿ ಮಳೆ  ಕಡಿಮೆಯಾಗಿದ್ದು ನೀರಿನ ಸಮಸ್ಯೆ ತಲೆದೂರಿದ್ದು, ಮಳೆಬಾರದೇ ಕಂಗೆಟ್ಟಿದ್ದ ಶಿವಮೊಗ್ಗದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ ತುಂಗಾ ಪಾತ್ರದ ನಿವಾಸಿಗಳಿಗೆ ಸ್ವಲ್ಪ ನೆಮ್ಮದಿ.

ನೀರಿಲ್ಲದೇ ತಳ ಕಾಣುತ್ತಿದ್ದ ತುಂಗಾ ಹರಿವಿನ ಸ್ಥಳದಲ್ಲಿ ಇದೀಗ ನೀರು ಕಾಣುವಂತಾಗಿದ್ದು, ನೀರಿನ ಹರಿವು ಜಾಸ್ತಿಯಾಗಿದ್ದು,   ಗಾಜನೂರು ಜಲಾಶಯದಿಂದ ನೀರು ಹೊರಕ್ಕೆ ಬಿಡಲಾಯಿತು. ರಾಜ್ಯದಲ್ಲೇ ಮೊದಲ ಬಾರಿಗೆ ಈ ವರ್ಷ ಗಾಜನೂರಿನಿಂದ ನೀರು ಬಿಡುಗಡೆ ಮಾಡಲಾಯಿತು. ಹೀಗಾಗಿ ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ 4 ಕ್ರೆಸ್ಟ್ ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಯಿತು. 2 – 5 ಸಾವಿರ ಕ್ಯುಸೆಕ್ಸ್ ನೀರು ಹೊರಬಿಡಲಾಯಿತು.

Leave a Reply

Your email address will not be published. Required fields are marked *

error: Content is protected !!