ಹೆಬ್ರಿ: ಪತಿಯ ಚಿಕಿತ್ಸೆಗೆ ಹಣದ ಅಡಚಣೆ ಪತ್ನಿ ಆತ್ಮಹತ್ಯೆ

ಅಜೆಕಾರು ಎ.14 (ಉಡುಪಿ ಟೈಮ್ಸ್ ವರದಿ): ಪತಿಯ ಚಿಕಿತ್ಸೆಗೆ ಹಣ ಇಲ್ಲದ ಕಾರಣ ಮಾನಸಿಕವಾಗಿ ನೊಂದು ಹೆಬ್ರಿಯ ಅಂಡಾರುವಿನ ಬಾಳೆ ಹಿತ್ಲುವಿನ ವನಿತಾ ಎಂಬವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   
ಎ.9 ರಂದು ಹಿರ್ಗಾನದ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡ ವನಿತಾ (45) ಅವರ ಪತಿ ಸತೀಶ್ ಎನ್.ರಾವ್ ಅವರಿಗೆ ಅಪರೇಶನ್ ಮಾಡುವ ಸಲುವಾಗಿ ಎ.12 ರಂದು ಹಣದ ವ್ಯವಸ್ಥೆಯನ್ನು ಮಾಡಿಕೊಳ್ಳಲು ವನಿತಾ ಅವರು ಮನೆಗೆ ಬಂದಿದ್ದರು.

ಆದರೆ ಹಣದ ವ್ಯವಸ್ಥೆ ಮಾಡಲು ಆಗದ ಕಾರಣ ನೊಂದಿದ್ದರು. ಮರುದಿನ ಬೆಳಿಗ್ಗೆ ಮನಿತಾ ಅವರು ಮನೆಯಲ್ಲಿ ಇಲ್ಲದೇ ಇರುವುದನ್ನು ಕಂಡು ಮನೆಯವರು ಹುಡುಕಿದ್ದು ಈ ವೇಳೆ ವನಿತಾ ಅವರ ಮೃತದೇಹ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.ಅದರಂತೆ ಮನಿತಾ ಅವರು ಗಂಡನಿಗೆ ಅಪಘಾತವಾದ ದಿನದಿಂದ ಮಾನಸಿಕವಾಗಿ ತುಂಬಾ ನೊಂದುಕೊಂಡಿದ್ದು, ಅಲ್ಲದೇ ಆಸ್ಪತ್ರೆಯಲ್ಲಿದ್ದ ಗಂಡನ ಆಪರೇಷನ್ ಗೆ ಹಣವಿಲ್ಲದ ಕಾರಣ ಮಾನಸಿಕವಾಗಿ ನೊಂದು ಜೀವನದಲ್ಲಿ ಬೇಸರಗೊಂಡು  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ಮಗ ಸ್ವಸ್ತಿಕ್ ಅವರು ನೀಡಿದ ಮಾಹಿತಿಯಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು

Leave a Reply

Your email address will not be published. Required fields are marked *

error: Content is protected !!