ಬ್ರಹ್ಮಾವರ: ಮಕ್ಕಳಿಂದ ತಂದೆಗೆ ಹಲ್ಲೆ- ದೂರು ದಾಖಲು
ಬ್ರಹ್ಮಾವರ ಮಾ.17 (ಉಡುಪಿ ಟೈಮ್ಸ್ ವರದಿ): ತಾಲೂಕಿನ ಹೇರೂರು ಗ್ರಾಮದ ದೂಪದಕಟ್ಟೆಯ ಬಳಿ ಮಕ್ಕಳೇ ತಂದೆಗೆ ಹೊಡೆದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಬಗ್ಗೆ ಹಲ್ಲೆಗೊಳಗಾದ ಹಾವೇರಿ ಮೂಲದ ಸುರೇಶ ವಾಲ್ಮೀಕಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಇವರು ಹೆಂಡತಿ ಶಾರದ ಹಾಗೂ ಮಕ್ಕಳಾದ ಆರೋಪಿ ಆಂಜನೇಯ ಮತ್ತು ಅರ್ಜುನರೊಂದಿಗೆ ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ, ದೂಪದಕಟ್ಟೆಯ ಬಳಿ ಇರುವ ಚಂದ್ರಶೇಖರ ಶೆಟ್ಟಿ ರವರ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿರುವ ಇವರು ಮಾ.14 ರಂದು ಕೊರಂಗ್ರಪಾಡಿಯಲ್ಲಿ ತರಕಾರಿ ವ್ಯಾಪಾರ ಮುಗಿಸಿ ರಾತ್ರಿ ಮನೆಗೆ ಬಂದಾಗ ಮನೆಯಲ್ಲಿದ್ದ ಆರೋಪಿ ಮಗ ಆಂಜನೇಯನು ಬೈದು ತಂದೆಗೆ ಕಬ್ಬಿಣದ ಪೈಪ್ ನಿಂದ ಹೊಡೆದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ನೋರ್ವ ಆರೋಪಿ ಮಗ ಅರ್ಜುನನು ದೂಡಿ ಹಲ್ಲೆ ನಡೆಸಿದ್ದಾನೆ ಎಂಬುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.