ಜೋಮ್ಲುತೀರ್ಥ- ನೀರುಪಾಲಾದ ಯುವಕನ ಮೃತದೇಹ ಪತ್ತೆ

ಹೆಬ್ರಿ – ಹೆಬ್ರಿ ಸಮೀಪದ ಜೋಮ್ಲುತೀರ್ಥ ಜಲಪಾತದಲ್ಲಿ ರವಿವಾರದಂದು ನೀರುಪಾಲಾಗಿದ್ದ ಕಡೂರಿನ ಸಚಿನ್ ಶೆಟ್ಟಿ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ನಿನ್ನೆ ಸಂಜೆ ಕುಟುಂಬದ ಸದಸ್ಯರೊಂದಿಗೆ ಜೋಮ್ಲುತೀರ್ಥಕ್ಕೆ ಬಂದಿದ್ದ ಸಚಿನ್ ನೀರಿನ ಸೆಳೆತದಲ್ಲಿ ಕೊಚ್ಚಿ ಹೋಗಿದ್ದರು ಅವರಿಗಾಗಿ ಪೊಲೀಸರು , ಸ್ಥಳೀಯ ಯುವಕರು, ಅರಣ್ಯ ಇಲಾಖೆಯವರು ನಿನ್ನೆಯಿಂದ ಶೋಧ ಕಾರ್ಯ ನಡೆಸಿದ್ದು ಇಂದು ಸಚಿನ್ ಮೃತ ದೇಹ ಜಲಪಾತದಿಂದ ಸುಮಾರು ೫೦೦ ಮೀಟರ್ ದೂರದ ನೀರಿನಲ್ಲಿ ಪತ್ತೆಯಾಗಿದೆ.
ಘಟನೆಯ ವಿವರ
ಸಚಿನ್ ಶೆಟ್ಟಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ದೀಪಾವಳಿಯ ರಜೆ ಕಳೆಯಲೆಂದು ಕಳೆದ ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದರು. ಭಾನುವಾರ ಬೆಳಗ್ಗೆ ತನ್ನ ಕುಟುಂಬದ ಸದಸ್ಯರೊಂದಿಗೆ ಜೋಮ್ಲುತೀರ್ಥಕ್ಕೆ ಬಂದಿದ್ದ. ಮಧ್ಯಾಹ್ನದ ವೇಳೆ ನೀರಿನಲ್ಲಿ ಈಜಾಡಲೆಂದು ಹೋಗಿದ್ದ ಸಚಿನ್ ನೀರಿನ ತೀವ್ರ ಸೆಳೆತಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು. ಕಳೆದ ೧ ವಾರದಿಂದ ಭಾರೀ ಮಳೆಯಿಂದ ಹೆಬ್ರಿ ಸಂತೆಕಟ್ಟೆಯ ಜೋಮ್ಲುತೀರ್ಥದಲ್ಲಿ ಭಾರೀ ಪ್ರವಾಹವಿದ್ದ ಹಿನ್ನೆಲೆಯಲ್ಲಿ ಸಚಿನ್ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದರು .ಬಾರಿ ಹುಡುಕಾಟದ ನಂತರ ಇಂದು ಮುಂಜಾನೆ ಅವರ ಮೃತ ದೇಹ ಪತ್ತೆಯಾಗಿದೆ

Leave a Reply

Your email address will not be published. Required fields are marked *

error: Content is protected !!